ಕಾದಂಬರಿ- ಸಂಚಿಕೆ -35

೨೦೨೪ ರ-ವೈದ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

 ಕಲಾಸ್ಪಂದನ (ರಿ) ಹಾವೇರಿ, ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದೊಂದಿಗೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಬಾಸೂರು ಗ್ರಾಮದ ಕೃಷಿ ಕಾರ್ಮಿಕ ರೈತರು, ಸ್ನೇಹ ಜೀವಿ ದಿ. ಮೌನೇಶಪ್ಪ ಕತ್ತಿ ಅವರ ಹೆಸರಿನಲ್ಲಿ ಕೊಡಮಾಡುವ ವೈದ್ಯಶ್ರೀ -೨೦೨೪ ರ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ ೧-೧೨-೨೦೨೪ ರ ರವಿವಾರದಂದು ಬೆಳಿಗ್ಗೆ ೧೦:೩೦ ಕ್ಕೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಹತ್ತಿರದ ಸ್ವರ್ಣ ಪ್ಯಾರಡೈಸ್ ಹೊಟೆಲ್ ನ ಮಂಥನ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾ ಸ್ಪಂದನ ಹಾವೇರಿಯ ಅಧ್ಯಕ್ಷರು ಮತ್ತು ಸ್ವರ್ಣ ಗ್ರೂಪ್ ಆಫ್ ಕಂಪನಿ.ಹುಬ್ಬಳ್ಳಿಯ ಡಾ. ಚಿ. ವ್ಹಿ ಎಸ್ ವ್ಹಿ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಸನ್ಮಾನ್ಯ ಬಸವರಾಜ ಹೊರಟ್ಟಿ ಮಾಡುವರು. ಅಧ್ಯಕ್ಷತೆಯನ್ನು ಹಾವೇರಿಯ ಕಲಾ ಸ್ಪಂದನದ ಅಧ್ಯಕ್ಷರು ಮತ್ತು ಸ್ವರ್ಣ ಗ್ರೂಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಚಿ. ವ್ಹಿ ಎಸ್ ವ್ಹಿ ಪ್ರಸಾದ್ ವಹಿಸುವರು.


ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಎಸ್ ವ್ಹಿ ಸಂಕನೂರ. ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ನ ಶಾಸಕರಾದ ಮಹೇಶ ಟೆಂಗಿನಕಾಯಿ. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಅಮರಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿನಿರ್ದೇಶಕರಾದ ಕೆ.ಎಚ್ ಚೆನ್ನೂರ, ಡಾ. ಪ್ರಕಾಶ ಸಂಕನೂರ, ಸ್ರೀರೋಗ ಮತ್ತು ಪ್ರಸೂತಿತಜ್ಞರಾದ ಡಾ. ಜಂಬುನಾಥ ಗೌಡ ಆಗಮಿಸುವರು.

೨೦೨೪ ನೇ ಸಾಲಿನ ವೈದ್ಯಶ್ರೀ ಪ್ರಶಸ್ತಿಯನ್ನು ಪುತ್ತೂರಿನ ಶಸ್ತ್ರಚಿಕಿತ್ಸಕರಾದ ಡಾ. ರವಿಶಂಕರ ಪರ್ವಾಜೆ ಹಾಗೂ ಹುಬ್ಬಳ್ಳಿಯ ಕಿಮ್ಸನ ಪ್ಯಾಥಾಲಜಿ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಕವಿತಾ ಏವೂರು ಅವರಿಗೆ ೨೫ ಸಾವಿರ ರೂಪಾಯಿ ನಗದು, ಫಲಕ, ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. 

ಕಾರ್ಯಕ್ರಮದಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ. ಸತ್ಯನಾರಾಯಣ ಮಾಸ್ತಮ್ಮನವರ, ಹುಬ್ಬಳ್ಳಿಯ ಕಿಮ್ಸನ ನಿರ್ದೇಶಕರಾದ ಡಾ. ಎಸ್ ಎಫ್ ಕಮ್ಮಾರ, ಐಎಮ್‌ಎ ಅಧ್ಯಕ್ಷರಾದ ಡಾ. ಪಿ ಎನ್ ಬಿರಾದಾರ, ಹುಬ್ಬಳ್ಳಿಯ ಇಂಜಿನೀಯರಿAಗ್ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಾ. ದೇವಕಿ ಯೋಗಾನಂದ ಉಪಸ್ಥಿತರಿರುವರು ಎಂದು ಡಾ. ಚಿ. ವ್ಹಿ ಎಸ್ ವ್ಹಿ ಪ್ರಸಾದ್ ತಿಳಿಸಿದ್ದಾರೆ.ಇದೇ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಹಿರಿಯ ವೈದ್ಯರಾದ ಡಾ.ವ್ಹಿ.ಬಿ ನಿಟಾಲಿ ಇವರಿಂದ ವೈದ್ಯಕೀಯ ಸಾಹಿತ್ಯ ಚಿಂತನೆಯ ಕುರಿತು ಉಪನ್ಯಾಸ ಮತ್ತು ಗಾಯಕ ಪ್ರೇಮಾನಂದ ಶಿಂಧೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ಹಾಗೂ ವಿವಿಧ ನೃತ್ಯ ಕಲಾ ತಂಡಗಳಿAದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದೆ ಅಲ್ಲದೇ ಸಾಧಕ ದಂಪತಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು ಎಂದು ವೈದ್ಯಶ್ರೀ ಪ್ರಶಸ್ತಿ ಸಂಸ್ಥಾಪಕರು, ಸಾಹಿತಿಗಳಾದ ಮಾರ್ತಾಂಡಪ್ಪ ಕತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳು